ನವದೆಹಲಿ: ಕೋವಿಡ್-೧೯ ರೂಪಾಂತರಿ

ಓಮಿಕ್ರಾನ್ ಪ್ರಕರಣಗಳು ಹೆಚ್ಚಳದ

ನಡುವೆ ದೇಶದಲ್ಲಿನ ಕೊರೋನಾ

ಪರಿಸ್ಥಿತಿ ಕುರಿತು ಮುಖ್ಯಮಂತ್ರಿ

ಗಳೊAದಿಗೆ ಪ್ರಧಾನಿ ನರೇಂದ್ರ ಮೋದಿ

ಗುರುವಾರ ಸಂವಾದ ನಡೆಸಿದರು.

ವಿಡಿಯೋ ಕಾನ್ಫರೆನ್ಸ್ ಮೂಲಕ

ನಡೆದ ಸಂವಾದದಲ್ಲಿ ಗೃಹ ಸಚಿವ

ಅಮಿತ್ ಶಾ, ಆರೋಗ್ಯ ಸಚಿವ

ಮುನ್ಸೂಖ್ ಮಾಂಡವೀಯಾ ಮುಖ್ಯ

ಮಂತ್ರಿ ಬಸವರಾಜ ಬೊಮ್ಮಾಯಿ

ಸೇರಿದಂತೆ ವಿವಿಧ ರಾಜ್ಯಗಳ

ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದರು.

ಒಮಿಕ್ರಾನ್ ದಿನೇ ದಿನೇ

ಹೆಚ್ಚಾಗುತ್ತಿದೆ. ಸೋಂಕಿನಿAದ ಆತಂಕ

ಪಡುವ ಅಗತ್ಯವಿಲ್ಲ. ಸೋಂಕು

ನಿಯAತ್ರಿಸಲು ಸರ್ಕಾರದಿಂದ ಕ್ರಮ,

ರೂಪಾಂತರಿ ಬಗ್ಗೆ ಸ್ಪಷ್ಟ ಚಿತ್ರಣ

ಸಿಕ್ಕಿದ್ದು, ಸೋಂಕು ಹರಡುದಂತೆ ಕ್ರಮ

ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ

ಪ್ರಧಾನಿ ಸೂಚಿಸಿದ್ದಾರೆ.

ಲಸಿಕೆ ಬಗ್ಗೆ ವದಂತಿಗಳಿಗೆ

ಕಿವಿಗೂಡಬಾರದು. ಸ್ಥಳೀಯವಾಗಿ

ಕಂಟೈನ್‌ಮೆAಟ್ ನಿಯಮ ಪಾಲಿಸಿ,

ಹೋಂ ಐಸೋಲೇಷನ್ ಚಿಕಿತ್ಸೆಗೆ

ಆದ್ಯತೆ ನೀಡಿ, ಕೋವಿಡ್ ಸೋಂಕಿತರಿಗೆ

ಟೆಲಿ ಮೆಡಿಸನ್ ಸಹಕಾರಿಯಾಗಿದೆ.

ಎಲ್ಲಾ ರೀತಿಯ ಪ್ರಭೇದ ಎದುರಿಸಲು

ಕೇಂದ್ರ ಸರ್ಕಾರ ಸಿದ್ಧವಿದೆ. ಪರಿಸ್ಥಿತಿ

ನಿರ್ವಹಣೆಗಾಗಿ ರಾಜ್ಯಗಳ ಜೊತೆಗೆ

ಸಹಕರಿಸಲು ಕೇಂದ್ರ ಸಿದ್ಧವಿದೆ

ಎಂದು ಪ್ರಧಾನಿ ರಾಜ್ಯಗಳಿಗೆ ಆಭಯ

ನೀಡಿದ್ದಾರೆ. ಹಿಂದಿನ ರೂಪಾಂತರಿಗಳಿಗೆ

ಹೋಲಿಸಿದರೆ ಒಮಿಕ್ರಾನ್ ವೇಗವಾಗಿ

ಹರಡುತ್ತಿದೆ. ನಮ್ಮ ಆರೋಗ್ಯ ತಜ್ಞರು

ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ.

ನಾವು ಎಚ್ಚರಿಕೆ ವಹಿಸಬೇಕಾಗಿದೆ.

ಆರೋಗ್ಯ ಮೂಲಸೌಕರ್ಯ

ಬಲಗೊಳಿಸಲು ಕೇಂದ್ರದಿAದ ೨೩,೦೦೦

ಕೋಟಿ ರೂ. ಪ್ಯಾಕೇಜ್‌ನ್ನು ರಾಜ್ಯಗಳಿಗೆ

ನೀಡಲಾಗಿದ್ದು, ಕೆಲವು ರಾಜ್ಯಗಳು

ಸದುಪಯೋಗ ಮಾಡಿಕೊಂಡಿ

ರುವುದಾಗಿ ಪ್ರಧಾನಿ ತಿಳಿಸಿದರು ಎಂದು

ಮೂಲಗಳಿAದ ತಿಳಿದುಬಂದಿದೆ. ಇನ್ನು

ಇದೇ ವೇಳೆ ಸೋಂಕು ಹರಡದಂತೆ

ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ ಎಂದು

ದೇಶ ನಿವಾಸಿಗಳಿಗಳಿಗೆ ಪ್ರಧಾನಿ ಮೋದಿ

ಸಲಹೆ ನೀಡಿದ ಪ್ರಧಾನಿ ಮೋದಿ,

‘ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆಗೆ

ಆದ್ಯತೆ ನೀಡಿ. ಇನ್ನು ಈ ಹೋಂ

ಐಸೋಲೇಷನ್‌ನಲ್ಲಿ ಟ್ರಾ÷್ಯಕಿಂಗ್,

ಟ್ರೀಟ್‌ಮೆAಟ್ ಅನುಸರಿಸಿ. ಇನ್ನು

ಕೇಂದ್ರ ಸರ್ಕಾರದ ಟೆಲಿ ಮೆಡಿಸನ್

ಸೌಲಭ್ಯ ಒದಗಿಸಿದೆ. ಕೋವಿಡ್

ಸೋಂಕಿತರಿಗೆ ಈ ಟೆಲಿ ಮೆಡಿಸನ್

ಸೌಲಭ್ಯ ಸಹಕಾರಿಯಾಗಿದೆ.

ಇನ್ನು ಆರೊಗ್ಯ ಕ್ಷೇತ್ರದ ತುರ್ತು

ಮೂಲಕ ಸೌಲಭ್ಯ ಹೆಚ್ಚಿಸಲಾಗಿದೆ. ಎಲ್ಲ

ರೀತಿಯ ಪ್ರಭೇದ ಎದುರಿಸಲು ಕೇಂದ್ರ

ಸಿದ್ಧವಿದೆ. ಇನ್ನು ಎಲ್ಲ ರಾಜ್ಯಗಳ ಜೊತೆ

ಸಹರಿಸಲು ಕೇಂದ್ರ ಸರ್ಕಾರ ಸಿದ್ಧವಿದೆ

ಎಂದರು. ಕೊರೊನಾ ನಿಯಂತ್ರಣಕ್ಕೆ

ಭಾರತದಲ್ಲಿ ಅತ್ಯುನ್ನತ ಸಿದ್ಧತೆಗಳನ್ನ

ತೆಗೆದುಕೊಳ್ಳಲಾಗ್ತಿದೆ. ೨ ವರ್ಷಗಳ

ಅನುಭವದ ಮೇಲೆ ನಿಭಾಹಿಸುತ್ತಿದ್ದೇವೆ.

ಸ್ಥಳೀಯವಾಗಿ ಕಂಟೋನ್ಮೆAಟ್

ನಿಯಮ ಕಡ್ಡಾಯವಾಗಿ ಪಾಲಿಸಿ

ಎಂದರು. ಇನ್ನು ಕೊವಿಡ್ ವಿರುದ್ಧ

ದೊಡ್ಡ ಅಸ್ತç ಅಂದ್ರೆ ವ್ಯಾಕ್ಸಿನ್ ಆಗಿದ್ದು,

ಶೇ.೯೦ರಷ್ಟು ಜನ ೨ನೇ ಡೋಸ್

ಲಸಿಕೆ ಪಡೆದಿದ್ದಾರೆ. ೧೫ ವರ್ಷದ

ಮೇಲ್ಪಟ್ಟ ೩ ಕೋಟಿ ಮಕ್ಕಳಿಗೆ ಲಸಿಕೆ

ನೀಡಲಾಗಿದೆ. ಫ್ರಂಟ್‌ಲೈನ್ ವರ್ಕಸ್,

ಹಿರಿಯರಿಗೆ ಬೂಸ್ಟರ್ ಡೋಸ್

ನೀಡಲಾಗ್ತಿದೆ. ಇನ್ನು ಸಾಂಪ್ರದಾಯಿಕ,

ಮನೆ ಔಷಧಗಳು ಉಪಯೋಗಕಾರಿ.

ಇಂತಹ ಸಂದರ್ಭದಲ್ಲಿ ಆಯುರ್ವೇದ

ಪದ್ದತಿ ಸಹಕಾರಿ ಎಂದು ಹೇಳಿದರು.